ಹುಕ್ಕೇರಿ ನಗರದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಪ್ಯಾರಾ ಮಿಲ್ಟ್ರಿ ಫೊರ್ಸ ಯೋಧರು ಪಥ ಸಂಚಲನೆ ನಡೆಸಿದರು.
ಗೋಕಾಕ ಡಿ ಎಸ್ಪಿ ದೂದಪೀರ ಮುಲ್ಲಾ
ನೇತೃತ್ವದಲ್ಲಿ ನಗರದ ಕೋರ್ಟ ಸರ್ಕಲ್ ದಿಂದ ಪ್ರಾರಂಭಿಸಿದ ಪಥ ಸಂಚಲನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಂಬರುವ ಲೋಕಸಭಾ ಚುನಾವಣೆ ಶಾಂತ ರೀತಿಯಿಂದ ಜರುಗಲು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜನತೆಗೆ ಜಾಗ್ರತೆ ಮೂಡಿಸಿದರು.
ಸಾರ್ವಜನಿಕರು ಯೋಧರಿಗೆ ಪುಷ್ಪ ಹಾಕಿ ಸ್ವಾಗತಿಸಿದರು
ಈ ಸಂದರ್ಭದಲ್ಲಿ ಹುಕ್ಕೇರಿ, ಸಂಕೇಶ್ವರ ಮತ್ತು ಯಮಕನಮರ್ಡಿ ಪೋಲಿಸ್ ಇನ್ಸಪೇಕ್ಟರ ಗಳಾದ ಅಧಿಕಾರಿಗಳಾದ ಜಯಂತ ಗಾಳಿ, ಶಿವಶರಣ ಅವುಜಿ, ಎನ್ ಎಂ ಶಿರಹಟ್ಟಿ ಹಾಗೂ ಸಿ ಆಯ್ ಇ ಎಸ್ ಎಫ್ ಮತ್ತು ಹುಕ್ಕೇರಿ ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹುಕ್ಕೇರಿಯಲ್ಲಿ ಪ್ಯಾರಾ ಮಿಲಿಟರಿ ಯೋಧರ ಪಥಸಂಚಲನೆ
