ಭರತೇಶ ಶಿಕ್ಷಣ ಸಂಸ್ಥೆಯ ನೂತನ ಇಂಜನಿಯರಿಂಗ್ ಕಾಲೇಜು ಪ್ರಾರಂಭ –

Kuntinath
By Kuntinath 1
WhatsApp Group Join Now
Telegram Group Join Now

ಭರತೇಶ ಶಿಕ್ಷಣ ಸಂಸ್ಥೆಯ ನೂತನ ಇಂಜನಿಯರಿಂಗ್ ಕಾಲೇಜು ಪ್ರಾರಂಭ –ವಿನೋದ ದೊಡ್ಡಣ್ಣವರ

(ಫೋಟೊ ಕ್ಯಾಪ್ಶನ್: 001: ಬೆಳಗಾವಿಯಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ಇಂಜನಿಯರಿಂಗ್ ಕಾಲೇಜು ಕುರಿತು ವಿನೋದ ದೊಡ್ಡಣ್ಣವರ ಅವರು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. )

ಬೆಳಗಾವಿ.: ಉತ್ತರ ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಅಗ್ರಗಣ್ಯ ಸಂಸ್ಥೆಯೆಂದು ಪರಿಗಣಿಸಲ್ಪಟ್ಟ ಭರತೇಶ ಶಿಕ್ಷಣ ಸಂಸ್ಥೆಯ ವತಿಯಿಂದ ಪ್ರಸ್ತುತ ವರ್ಷದಿಂದ ಇಂಜನಿಯರಿಂಗ್ ಕಾಲೇಜುವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಅವರು ಇಂದಿಲ್ಲಿ ಹೇಳಿದರು.
ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1962 ರಲ್ಲಿ ಭರತೇಶ ಎಜ್ಯುಕೇಶನ ಟ್ರಸ್ಟ ಹೆಸರನಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಇಂದು ಬೆಳಗಾವಿ ನಗರ , ಹಲಗಾ ಹಾಗೂ ಬಸವನ ಕುಡಚಿಯಲ್ಲಿ 3 ಸುಸಜ್ಜಿತ ಕ್ಯಾಂಪಸಗಳನ್ನು ಹೊಂದುವ ಮೂಲಕ 20 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತ ಬಂದಿದೆ ಎಂದು ಅವರು ತಿಳಿಸಿದರು.
ಭರತೇಶ ಶಿಕ್ಷಣ ಸಂಸ್ಥೆಯು ಈಗಾಗಲೇ ಕಳೆದ 40 ವರ್ಷಗಳಿಂದ ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಮೂಲಕ ಇಂಜನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.
ಇದೀಗ ಭರತೇಶ ಸಂಸ್ಥೆಯು ಬಸವಣ ಕುಡಚಿಯಲ್ಲಿ ಭರತೇಶ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ – ಹೊಸ ಇಂಜನಿಯರಿಂಗ್ ಕಾಲೇಜುವನ್ನು ಪ್ರಾರಂಭಿಸುತ್ತಿದೆ. ಈ ಕಾಲೇಜಿಗೆ ಅಖಿಲ ಭಾರತ ತಾಂತ್ರಿಕ ಶೀಕ್ಷಣ ಮಂಡಳಿ (AICTE) ಅನುಮೋದಿಸಿದೆ. ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದೊಂದಿಗೆ ಸಂಯೋಜಿತವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಸ್ತುತ ಹೊಸದಾಗಿ ಪ್ರಾರಂಭವಾಗುತ್ತಿರುವ ಇಂಜನಿಯರಿಂಗ್ ಕಾಲೇಜುನಲ್ಲಿ ನಾಲ್ಕು ಶಾಖೆಗಳನ್ನು ಹೊಂದಲಾಗಿದೆ. .
1) ಕಂಪ್ಯೂಟರ್ ಸೇನ್ಸ -120
2) ಕೃತಕ ಬುದ್ದಮತ್ತೆ ಮತ್ತು ಯಂತ್ರ ಕಲಿಕೆ (AIML) -60
3) ಮಾಹಿತಿ ವಿಜ್ಞಾನ – 60
4) ಎಲೆಕ್ಟಾçನಿಕ್ ಮತ್ತು ಸಂವಹನ-120
ಹೀಗೆ ಒಟ್ಟು 360 ಸಿಟುಗಳನ್ನು ಹೊಂದಿದೆ. ಎಂದು ಅವರು ತಿಳಿಸಿದರು.

ಈ ಕೋರ್ಸಗಳು ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ ಮಾಡಿಕೊಳ್ಳಲು ಅನಕೂಲವಾಗುತ್ತವೆ. ಸುಮಾರು 30000 ಚದರ ಅಡಿಗಳಷ್ಟು ವಿಸ್ತಾರವಾದ ಬೆಳಗಾವಿಯ ಬಸವನ ಕುಡಚಿಯ ಭರತೇಶ ಚಂದ್ರಗಿರಿ ಕ್ಯಾಂಪಸ್‌ನಲ್ಲಿ ನೂತನವಾಗಿ ಹಾಗೂ ವಾಸ್ತುಶಿಲ್ಪದ ಹೊಸ ಕಟ್ಟಡದಲ್ಲಿ ಈ ಕಾಲೇಜುವನ್ನು ಪ್ರಾರಂಭಿಸಲಾಗಿದೆ. ಹಾಗೂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿಗೃಹಗಳನ್ನು ಸಹ ಹೊಂದಿದೆ. ನಿರಂತರ ಸಾರಿಗೆ ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಇಂಜನಿಯರಿಂಗ್ ಶೀಕ್ಷಣವನ್ನು ಪಡೆಯಲು ಮತ್ತು ಉತ್ತಮ ಜೀವನ ರೂಪಿಸಲು ಅರ್ಹ ವಿದ್ಯಾರ್ಥಿಗಳಿಗೆ ಅತ್ಯಂತ ಸ್ಪರ್ಧಾತ್ಮಕ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತಿದೆ. ಮ್ಯಾನೆಜಮೆಂಟ್ ಸಿಟುಗಳ ಪ್ರವೇಶಾತಿ ಈಗಾಗಲೇ ಭರದಿಂದ ಸಾಗಿವೆ. ಭರತೇಶ ಇಂಜನಯರಿಂಗ್ ಕಾಲೇಜು ಹಲವಾರು ಕೈಗಾರಿಕೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಕೈಗಾರಿಕಾ ಭೇಟಿಗಳು, ಪ್ರಾಜೆಕ್ಟ ಆಧಾರಿತ ಕಲಿಕೆ, ಮತ್ತು ಕೌಶಲ್ಯ ಪ್ರಯೋಗಾಲಯಗಳನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ
90710-15777 ಇಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಹಳೆ ವಿದ್ಯಾರ್ಥಿಗಳ ಭೇಟಿ : ಭರತೇಶ ಹೋಮಿಯೋಪೆಥಿಕ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಭೇಟಿ ಕಾರ್ಯಕ್ರಮ ಶನಿವಾರ ಮೇ.25 ರಂದು ಬೆಳಿಗ್ಗೆ 10;30 ಗಂಟೆಗೆ ಬಸವನ ಕುಡಚಿ ಆವರಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅರಿಹಂತ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಮಹಾದೇವ ದಿಕ್ಷಿತ ಅವರು ಆಗಮಿಸಲಿದ್ದಾರೆ. ಅದರಂತೆ ಬ್ಯಾಂಕ ಆಫ್ ಇಂಡಿಯಾ ವಲಯ ಪ್ರಬಂಧಕ ವಿ.ವಿ.ಕೃಷ್ಣ ಕಿಶೋರ, ದೊಡ್ಡಣ್ಣವರ ಬ್ರರ‍್ಸ ನಿರ್ದೇಶಕ ಪ್ರವೀಣ ದೊಡ್ಡಣ್ಣವರ, ಮೊದಲಾದವರು ಆಗಮಿಸಲಿದ್ದಾರೆಂದು ವಿನೋದ ದೊಡ್ಡಣ್ಣವರ ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶ್ರೀಪಾಲ ಖೇಮಲಾಪೂರೆ, ಖಜಾಂಚಿ ಭೂಷಣ ಮಿರ್ಜಿ, ಆಡಳಿತ ಮಂಡಳಿಯ ಸದಸ್ಯರಾದ ಹೀರಾಚಂದ ಕಲಮನಿ, ಡಾ. ಸಾವಿತ್ರಿ ದೊಡ್ಡಣ್ಣವರ, ಅಶೋಕ ದಾನವಡೆ.ರಾಜೇಂದ್ರ ರಾಮಗೊಂಡಾ, ಶರದ ಪಾಟೀಲ, ಸಂಸ್ಥೆಯ ಸದಸ್ಯರಾದ ದೇವೇಂದ್ರ ದೇಸಾಯಿ, ಸಂಜೀವ ದೊಡ್ಡಣ್ಣವರ, ಕಾಲೇಜು ಆಡಳಿತಾಧಿಕಾರಿ ಡಾ.ಗೋಮಟೇಶ ರಾವನ್ನವರ, ಪ್ರಾಚಾರ್ಯ ಡಾ. ವೀಣಾ ಕರ್ಚಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

**********************

WhatsApp Group Join Now
Telegram Group Join Now
Share This Article